Home » Trending News » Pitru Paksha 2023- ಪಿತೃಪಕ್ಷ ಆರಂಭವಾಗುವ ದಿನ , ಯಾವ ದಿನದಂದು ಯಾವ ಶ್ರಾದ್ಧ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Pitru Paksha 2023- ಪಿತೃಪಕ್ಷ ಆರಂಭವಾಗುವ ದಿನ , ಯಾವ ದಿನದಂದು ಯಾವ ಶ್ರಾದ್ಧ? ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Group Join Now
Telegram Group Join Now
WhatsApp Image 2023 09 28 at 10.42.48

ಏನಿದು ಪಿತೃ ಪಕ್ಷ, ಈ ವರ್ಷ ಯಾವಾಗ ಮತ್ತು ಯಾವ ದಿನಾಂಕ ದಂದು ಬರುತ್ತದೆ ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನಿ ಮಾಸದ ಕೃಷ್ಣ ಪಕ್ಷವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯವರೆಗೆ ಮುಂದುವರಿಯುತ್ತದೆ.
ಪಿತೃ ಪಕ್ಷ ಅಥವಾ ಶ್ರಾದ್ಧ ಎಂದರೆ ಹಿಂದೂಗಳು ತಮ್ಮ ಪೂರ್ವಜರನ್ನು ಸ್ಮರಿಸಲು ಇರುವ 15 ದಿನಗಳ ಆಚರಣೆಯಾಗಿದೆ. ಈ 15 ದಿನಗಳ ಅವಧಿಯಲ್ಲಿ ಒಂದು ದಿನ ಮಕ್ಕಳು ಪಿತೃಲೋಕದಲ್ಲಿರುವ ಪೂರ್ವಜರಿಗೆ ಶ್ರಾದ್ಧವನ್ನು ಮಾಡುತ್ತಾರೆ. ಸ್ವರ್ಗ ಮತ್ತು ಭೂಮಿಯ ನಡುವಿನ ಕ್ಷೇತ್ರವನ್ನು ಪಿತೃಲೋಕ ಎಂದು ಕರೆಯಲಾಗುತ್ತದೆ.

ಈ ವರ್ಷದ ಮಹಾಲಯ ಅಮಾವಾಸ್ಯೆ(Mahalaya amavase) ಅಥವಾ ಪಿತೃ ಪಕ್ಷದ ದಿನಾಂಕ :

ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 29 ರಂದು ಆರಂಭವಾಗಲಿದ್ದು, ಅಕ್ಟೋಬರ್ 16 ರಂದು ಮುಕ್ತಾಯವಾಗುತ್ತದೆ. ಈ ಅವಧಿಯಲ್ಲಿ ಶುಭಕಾರ್ಯಗಳನ್ನು ಮಾಡಲಾಗುವುದಿಲ್ಲ.

Picsart 23 06 10 14 01 54 141

ಯಾರು ಯಾವಾಗ ಶ್ರಾದ್ಧ ಮಾಡಬೇಕು?

ಶುಕ್ಲ ಪಕ್ಷದ ಹುಣ್ಣಿಮೆಯಿಂದ ಕೃಷ್ಣ ಪಕ್ಷದ ಅಮಾವಾಸ್ಯೆಯ ವರೆಗೆ 15 ದಿನಗಳ ಪೈಕಿ ಯಾವ ದಿನವಾದರೂ ಶ್ರಾದ್ಧ ಮಾಡಬಹುದು. ಆದರೆ ಶಾಸ್ತ್ರಗಳ ಪ್ರಕಾರ, ಯಾವುದೇ ತಿಂಗಳ ಶುಕ್ಲ ಪಕ್ಷ ಅಥವಾ ಕೃಷ್ಣ ಪಕ್ಷದ ದಿನಾಂಕದಂದು ಮರಣ ಹೊಂದಿದ ವ್ಯಕ್ತಿಗಳ ಶ್ರಾದ್ಧ ಕರ್ಮವನ್ನು ಪಿತೃ ಪಕ್ಷದ ಅದೇ ದಿನಾಂಕದಂದು ಮಾಡಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಪೂರ್ವಜರ ಮರಣದ ದಿನಾಂಕವನ್ನು ತಿಳಿದಿಲ್ಲದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ಈ ಪೂರ್ವಜರ ಶ್ರಾದ್ಧ ಕರ್ಮವನ್ನು ಅಶ್ವಿನಿ ಅಮವಾಸ್ಯೆಯಂದು ಮಾಡಬಹುದು ಎಂದು ಶಾಸ್ತ್ರಗಳಲ್ಲಿ ನೀಡಲಾಗಿದೆ. ಇದಲ್ಲದೇ ಅಪಘಾತಕ್ಕೀಡಾದವರಿಗೆ ಚತುರ್ದಶಿ ತಿಥಿಯಂದು ಶ್ರಾದ್ಧವನ್ನು ಮಾಡಬಹುದು.

ಪಿತೃ ಪಕ್ಷದ ಆಚರಣೆ ಮತ್ತು ಮಹತ್ವ :

ಪಿತೃ ಪಕ್ಷ ಆಚರಿಸುವ ದಿನದಂದು ಕುಟುಂಬದ ಹಿರಿಯ ಮಗ ಅಥವಾ ಇತರೆ ಯಾರಾದರೂ ಸದಸ್ಯರು ಪುಣ್ಯ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಬೇಕು. ಪೂರ್ವಜರ ಚಿತ್ರವನ್ನು ದಕ್ಷಿಣ ದಿಕ್ಕಿನಲ್ಲಿ ಮರದ ಮೇಜಿನ ಮೇಲೆ ಇರಿಸಬೇಕು. ಶ್ರಾದ್ಧ ವಿಧಿಗಳಿಗಾಗಿ ಅಕ್ಕಿ ಮತ್ತು ಎಳ್ಳು ಬೀಜಗಳನ್ನು ಒಳಗೊಂಡಿರುವ ಪಿಂಡ ಹಾಗೂ ವಿವಿಧ ಬಗೆಯೆ ವಿಶೇಷ ಆಹಾರ ತಯಾರಿಸಬೇಕು. ಅದನ್ನು ಮೊದಲು ಕಾಗೆಗೆ ಅರ್ಪಿಸಲಾಗುತ್ತದೆ.

ಕಾಗೆಯನ್ನು ಪಿತೃಲೋಕದ ಪಾಲಕನಾಗಿರುವ ಯಮನ ಸಂಕೇತ ಎಂದು ನಂಬಲಾಗಿದೆ. ಕಾಗೆಗಳು ಈ ಆಹಾರ ತಿಂದರೆ ಪಿತೃಗಳು (ಮೃತಪಟ್ಟವರು/ಪೂರ್ವಜರು) ಸವಿದರು ಎಂದು ಭಾವಿಸಲಾಗುತ್ತದೆ. ಪಿತೃಗಳು ಭೂಮಿಗೆ ಬಂದು ನಮಗೆ ಆಶಿರ್ವಾದ ಮಾಡುತ್ತಾರೆ ಎಂದು ನಂಬಲಾಗಿದೆ. ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡಿದರೆ, ಆಹಾರ ದಾನ ಮಾಡಿದರೆ ಒಳಿತಾಗುತ್ತದೆ.

ಪಿತೃಪಕ್ಷದ ಸಮಯದಲ್ಲಿ ಬ್ರಾಹ್ಮಣರಿಗೆ ಅನ್ನದಾನ ಮಾಡುವುದರಿಂದ ಪಿತೃ ಆತ್ಮಗಳು ಪ್ರಸನ್ನವಾಗುತ್ತವೆ ಮತ್ತು ಅವರು ಶಾಂತಿಯನ್ನು ಪಡೆಯುತ್ತಾರೆ ಮತ್ತು ಪಿತೃ ಋಣದಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಮಹಾಲಯ ಅಮಾವಾಸ್ಯೆ ದಿನ ಕೂಡ ಪಿಂಡದಾನ ಮಾಡುವ ಮೂಲಕ ಪಿತೃ ಪೂಜೆ ನೆರವೇರಿಸಬಹುದು.

Picsart 23 06 10 13 55 14 667

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹ

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *